Thursday, February 27, 2014

  ಪ್ರಕಟಣೆ
ಬೆರ್ಲಿನ್ ವಿಶ್ವವಿದ್ಯಾನಿಲಯದಿಂದ ಜೈನ ವಾಸ್ತುಶಿಲ್ಪ ಮತ್ತು ಕಲೆಯ ವಿಶೇಷ ಅಧ್ಯಯನಕ್ಕಾಗಿ ಭಾರತದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಕೇಂದ್ರ, ಶ್ರವಣಬೆಳಗೊಳಕ್ಕೆ ಬಂದಿರುವ ವಿದ್ಯಾರ್ಥಿಗಳ ತಂಡ ಅಲ್ಲಿಂದ ಮೂಡುಬಿದಿರೆಗೆ ೨೫. ೦೨. ೨೦೧೪ರ ಸಂಜೆ ಆಗಮಿಸಿ ಜೈನಕಾಶಿಯ ವಿವಿಧ ಜಿನಾಲಯಗಳ ದರ್ಶನಗೈದರು. ೨೬. ೦೨. ೨೦೧೪ರಂದು ಶ್ರೀಮಠದ ರಮಾರಾಣಿ ಶೋಧ ಸಂಸ್ಥಾನದಲ್ಲಿದ್ದ ಅಪೂರ್ವ ಗ್ರಂಥಗಳ ಮಾಹಿತಿ ಪಡೆದು ಮೂಡುಬಿದಿರೆ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳೊಂದಿಗೆ ಜೈನ ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಸುಮಾರು ಒಂದೂವರೆ ಗಂಟೆ ಸಂವಾದ ನಡೆಸಿ ವಿವರವನ್ನು ಪಡೆದರು. ಈ ಸಂದರ್ಭ ವಿಶ್ವವಿದ್ಯಾನಿಲಯದ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕು|| ಸೂಕಿ ಜೊಹಾನ್ನ ಥೆರೇಸಾ, ಕು|| ಪೋಲ್ಲರ್ ವಿವೈನ್, ಕು|| ಲೆನುವಿತ್ತೆ ನದಿನೆ, ಕು|| ಕ್ಲಿಮೆಸ್ ಝೆವೆಸ್ಕಿ ಡೊಮಿನಿಕಾ, ಶ್ರೀ ನೊವೆಡ್ಝಿಕಿ ಕ್ಲಾಸ್ ಜೆ. ಬೆಂಜಮಿನ್, ಮತ್ತು ಶ್ರೀ ಸ್ಕ್ರೂಝರ್ ಜೊಹಾನ್ಸ್ ಇವರುಗಳಿಗೆ ಉಜ್ವಲ ಭವಿಷ್ಯ ಕೋರಿ ಸಂಶೋಧನೆಗೆ ಶುಭ ಹಾರೈಸಿ ಶ್ರೀಶ್ರೀಗಳವರು ನೆನಪಿನ ಕಾಣಿಕೆ ನೀಡಿದರು.

No comments:

Post a Comment