ಬದುಕಿ
ಬದುಕಲು ಬಿಡಿ
ಜೀವ ದಯಾಷ್ಟ ಮಿ ಹಳಗನ್ನಡದ ಸಾಹಿತ್ಯದಲ್ಲಿ ಕವಿಚಕ್ರವರ್ತಿ
ಜನ್ನನ ‘ಯಶೋಧರ ಚರಿತೆ’ ಒಂದು ಗಮನಾರ್ಹವಾದ ಕಥಾನಕ.
ಸಮಕಾಲೀನ
ಸಮಾಜದ ಬದುಕಿನ ಕ್ರೌರ್ಯ, ಹಿಂಸೆ ಹಾಗೂ ಮನುಷ್ಯನ ಮನೋಪ್ರವೃತ್ತಿ ಆಡು, ಕೋಳಿ, ಕೋಣ, ನರಬಲಿ ಹಾಗೂ
ಬೇಟೆಯಾಡುವ ಪ್ರಸಂಗಗಳಿಂದು ಹಿಡಿದು ಹಿಟ್ಟಿನ ಹುಂಜವನ್ನು ಬಲಿಕೊಡುವ ಸಂಕಲ್ಪ ಹಿಂಸೆಯ ತನಕ ಹಿಂಸೆಯ
ವೈವಿಧ್ಯತೆಯಿದೆ. ಇಲ್ಲಿ ಶಾರೀರಕವಾದ ಹಿಂಸೆಗಿಂತ ಮಾನಸಿಕ ಹಾಗೂ ಸಂಕಲ್ಪ ಹಿಂಸೆಯ ಪರಿಣಾಮ ಭೀಕರವಾಗಿದೆ.
.
ಅಹಿಂಸೆ ಭಾರತಿಯ ಸಂಸ್ಕೃತಿ ಜೀವನದಲ್ಲಿ ಒಂದು ದೊಡ್ಡ ಮೌಲ್ಯ
ಈ ಅವಳಿ ಜವಳಿ ಬಾಲಕ ಬಾಲಕಿಯರು ಒಬ್ಬರಿಗೆ ಒಬ್ಬರು ಸಮಾಧಾನ ಮಾಡಿಕೊಂಡು, ಧೈರ್ಯ ತಂದುಕೊಂಡು ‘ಪಸಿದ ಕೃತಾಂತನ ಬಾಣಸುವೊಲಿರ್ದ ಮಾರಿಮನೆ’ಗೆ ಬರುತ್ತಾನೆ. ಮಾರಿಗೆ ಅವರಿಬ್ಬರ ತಲೆಕಡಿಯುವುದಕ್ಕೆ ಮುಂಚೆ ಅವರು ‘ಬೈರವನ ಜವನ ಮಾರಿಯ ಮೂರಿಯವೋಲ್’ ನಂತೆ ನಿಂತಿರುವ ಮಾರಿದತ್ತ ಪದ್ಧತಿಯಂತೆ ತನಗೆ ಹರಸಬೇಕೆಂದು ಕೇಳಿಕೊಂಡಾಗ, ಬಾಲಕ ಬಾಲಕಿಯರು ದೊರೆಗೆ ‘ನಿರ್ಮಲ ಧರ್ಮದಿಂದ ಪಾಲಿಸು ಧರೆಯಂ’ ಎಂದು ಹರಸುತ್ತಾರೆ. ಆ ಮಾತು ಕೇಳಿದ ರಾಜ ಕಳವಳಗೊಂಡು ಬಾಲಕ ಬಾಲಕಿಯರ ಹಿಂದಿನ ಚರಿತ್ರೆಯನ್ನು ಕೇಳಲು ಆಸಕ್ತಿ ತಾಳುತ್ತಾನೆ. ಆಗ ಅವರಿಬ್ಬರೂ ‘ಯಶೋಧರ ಚರಿತಾವತಾರ’ದ ಕಥೆಯನ್ನು ಹೇಳತೊಡಗುತ್ತಾರೆ. ಸಾವಿನ ಸಮೀಪ ತತ್ತರಿಸಿ ನಿಂತು, ಆ ಎಳೆಯ ಚೇತನಗಳು ಕಥೆ ಹೇಳುವ ರೀತಿ, ಹಿಂಸೆಯ ತುತ್ತ ತುದಿಯಲ್ಲಿ ನಿಂತು ಕಥೆ ಕೆಳುತ್ತಿರುವ ಮಾರಿದತ್ತನ ಮನಸ್ಸು ಕುತೂಹಲಕಾರಿಯಾಗಿದೆ. ಇದರಿಂದ ರಾಜ ಆ ಕಥೆಯನ್ನು ಕೇಳಿ ಕೊನೆಗೆ ತನ್ನ ಹಿಂಸಾಪ್ರವೃತ್ತಿಯನ್ನು ತೊರೆದು ಅಹಿಂಸೆಯ ದಾರಿಯನ್ನು ಹಿಡಿಯುತ್ತಾನೆ ಅಹಿಂಸೆಯ ಬಗ್ಗೆ ಎಲ್ಲ ಮಹಾತ್ಮರೂ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಅಹಿಂಸೆಯೇ ದೊಡ್ಡ ಧರ್ಮ – ಅಹಿಂಸಾ ಪರಮೋ ಧರ್ಮಃ ಎಂಬ ಮಾತು ಪ್ರಸಿದ್ಧವಾಗಿದೆ‘ಜೈನಧರ್ಮದ ಪರಿಭಾಷೆಯಲ್ಲಿ ಅಹಿಂಸೆಗೆ ಧರ್ಮದಲ್ಲಿ ಬಹಳ ಮುಖ್ಯವಾದ ಸ್ಥಾನವಿರುವುದು ತಮ್ಮ ಸಾಧನೆ ಬೋಧನೆ ಮತ್ತು ತಾತ್ವಿಕ ಚಿಂತನೆಗಳಿಂದ ಭಾರತದಲ್ಲಿ ಧರ್ಮ ಪ್ರವರ್ತಕರೆಂದು ಕರೆಸಿಕೊಂಡವರ ಸಾಲಿನಲ್ಲಿ ಮಾಹಾವೀರರದು ಮರೆಯಲಾಗದ ಹೆಸರು. ದ್ರವ್ಯ ಹಿ೦ಸೆ ಭಾವ ಹಿ೦ಸೆ ಎರಡು ರಿತೀಯ ಹಿಂಸೆಯ ಬಗ್ಗೆ ಉಲ್ಲೆಖಿಸಿ ಅದರಿಂದ ಪಾಪ ಅದರೆ ಸಾಮನ್ಯ ಸಾದಕರು ಬದುಕುದಕ್ಕಾಗಿ ಆನಿವಾಯ೯ ವಾಗಿ ಆರ೦ಭ( ಕ್ರ ಷೀ ),ಊ ಧ್ಯೊಗ,ವಿರೋದಿ ಹಿ೦ಸೆ ಯು ಅನಿವಾಯ೯ , ಯತಿಗಳ ಆಚಾರ ದಲ್ಲಿ ಅಹಿಂಸೆಗೆ ಧರ್ಮದಲ್ಲಿ ಬಹಳ ಮುಖ್ಯವಾದ ಸ್ಥಾನವಿರುವುದು ಸಮಿತಿ’ ಮತ್ತು ‘ಗುಪ್ತಿ’ ಎಂಬ ಎರಡು ಭಾಗವಾಗಿ ವಿಂಗಡಿಸಲಾಗಿದೆ.
ಮೂರು ಗುಪ್ತಿಗಳು ಇವು: ವಾಗ್ ಗುಪ್ತಿ(ಮಾತಿನ ಸಂಯಮ) . ಮನೋಗುಪ್ತಿ (ಮನಸ್ಸಿನ ಸಂಯಮ) ಮತ್ತು ಕ್ರಿಯಾ ಗುಪ್ತಿ (ವಿಶೇಷವಾಗಿ ಕರ್ಮೇಂದ್ರಿಯಗಳ ಸಂಯಮ)
ಐದು ಸಮಿತಿಗಳು ಹೀಗಿವೆ. ಭಾಷಾಸಮಿತಿ (ಎಚ್ಚರಿಕೆಯಿಂದ ಚಿಂತಿಸಿ ಹಿತವಾಕ್ಯಗಳನ್ನಾಡುವುದು), ಏರ್ಷಣಾಸಮಿತಿ (ಆಸೆಗಳನ್ನು ನಿಯಂತ್ರಿಸುವುದು), ಆದಾನಸಮಿತಿ (ಆಹಾರದಲ್ಲಿ ಹಿತ, ಮಿತ ಮತ್ತು ಪರಿಶುದ್ಧಿ), ಈರ್ಯಾಸಮಿತಿ (ವಿಹಾರಾದಿಗಳಲ್ಲಿ ಸಾವಧಾನತೆಯನ್ನು ಪರಿಪಾಲಿಸುವುದು) ಮತ್ತು ವ್ಯುತ್ಸರ್ಗಸಮಿತಿ (ಪರಿಶುದ್ಧಿಯ ಸಮಯದಲ್ಲಿ ಎಚ್ಚರವಹಿಸುವುದು),
ಈ ಎಂಟು ಸರಳ ನಿಯಮಗಳನ್ನು ನಿಷ್ಠೆಯಿಂದ ಅಹೋರಾತ್ರಿ ಪರಿಪಾಲಿಸಿದರೆ ಆತ್ಮಸಂಯಮ ಬರುತ್ತದೆ; ಆಸೆಗಳು ದೂರವಾಗುತ್ತವೆ. ಜೀವ ಶುದ್ಧವಾಗುತ್ತದೆ
. ಅಹಿಂಸೆಗೆ ಧರ್ಮದಲ್ಲಿ ಬಹಳ ಮುಖ್ಯವಾದ ಸ್ಥಾನವಿರುವುದು
ನಿಶ್ಚಿತ ಯೋಗಸಾಧನೆಯಲ್ಲಿಯೂ, ಯಜ್ಞಾಚರಣೆಯಲ್ಲಿಯೂ ಅಹಿಂಸೆ ಸರ್ವಪ್ರಥಮ ಸ್ಥಾನವನ್ನು ಪಡೆಯುತ್ತದೆ.
ಭಗವದ್ಗೀತೆಯಲ್ಲಿ ಅಹಿಂಸೆಯ ಬಗ್ಗೆ ಅನೇಕ ಬಾರಿ ಉಲ್ಲೇಖ ಬಂದಿದೆ. ಭಿನ್ನಾಭಿಪ್ರಾಯಗಳು
ಭಾಷಿಕ ಹಿಂಸೆಯೂ ಆಗಬಾರದು; ಭೌತಿಕ ಹಿಂಸೆಯೂ ಆಗಬಾರದು. ಬಹುಭಾಷಿಕ, ಬಹುಧಾರ್ಮಿಕ ಮತ್ತು ಬಹು ಸಾಂಸ್ಕೃತಿಕವಾಗಿರುವ
ನಮ್ಮ ದೇಶದ ಬಹುತ್ವ ನಾಶವಾಗಬಾರದು ಪಾರಮಾರ್ಥಿಕ ಅಹಿಂಸೆಯೇ
ಅಹಿಂಸೆಯ ಉತ್ತುಂಗಸ್ಥಿತಿ. "ಅಹಿಂಸಾ
ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ
ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಯೇಸು, ಬುದ್ಧ,
ಬಸವ, ಗಾಂಧಿ ಮತ್ತು ಅಂಬೇಡ್ಕರ್ ಮೊದಲಾದ ಸಮಾಜ ಸುಧಾರಕರು ಅಹಿಂಸೆಗೆ ಹೆಚ್ಚು ಒತ್ತುಕೊಟ್ಟಿರುವುದನ್ನು
ನಾವು ಕಾಣಬಹುದಾಗಿದೆ. ಸವ೯ರಿಗೊ
ಜೀವ ದಯಾಷ್ಷಮಿ ಪವ೯ದ ಹಬ್ಬದ ಶುಭಾಶಯಗಳು
¥ÀgÀªÀÄ ¥ÀÆdå ¸Àé¹Û²æÃ
ZÁgÀÄQÃwð ¨sÀmÁÖgÀPÀ ¥ÀArvÁZÁAiÀÄðªÀAiÀÄð ªÀĺÁ¸Áé«ÄUÀ¼ÀªÀgÀÄ,,
²æÃ
eÉÊ£ÀªÀÄoÀ ªÀÄÆqÀ©¢gÉ
No comments:
Post a Comment