Tuesday, March 29, 2022

birthday 29 march 2022

 

🌸ಇಂದು ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಮೂಡಬಿದ್ರಿ ಅವರ ಜನ್ಮದಿನ🌸
⭕ ಜೈನ ದರ್ಶನದ ಪ್ರಖಾಂಡ ಪಂಡಿತರು, ರತ್ನಕರಂಡಕ ವಿಶಾರದರು,ಜೈನ ಧರ್ಮದ ಪ್ರಚಾರದಲ್ಲಿ ಶ್ರದ್ಧೆವುಳ್ಳವರು, ಲೇಖಕರು, ಪ್ರಖಾಂಡ ವಾಗ್ಮಿಗಳು, ಅಸಾಧಾರಣ ಪ್ರತಿಭಾಶಾಲಿಗಳು, ವಾಸ್ತು ಶಾಸ್ತ್ರಜ್ಞರು, ಕಲೆಯ ಪ್ರವರ್ತಕರು, ಆಶ್ರಯದಾತರು, ದಕ್ಷಿಣ ಕಾಶಿಯ 18 ಬಸದಿಗಳ ಶ್ರೇಯೋಭಿವೃದ್ಧಿಗಾಗಿನ ಪ್ರೆರಕರೂ ಆದ ಶ್ರೀಗಳ ಜನ್ಮದಿನ ಇಂದು. ಆ ಹಿನ್ನೆಲೆಯಲ್ಲಿ ಶ್ರೀಗಳ ಸಂಕ್ಷಿಪ್ತ ಪರಿಚಯ:
⭕ದಿನಾಂಕ 29-03-1970ರಲ್ಲಿ ಸುಮ್ಮಗತ್ತಿನ ಶ್ರೀ ಎಂ ಕೆಂಚಪ್ಪ ಹೆಗ್ಡೆ ಹಾಗೂ ಶ್ರೀಮತಿ ಲಲಿತಾ ದಂಪತಿಗಳ ತೃತೀಯ ಸುಪುತ್ರರಾಗಿ ಜನಿಸಿದರು. ಪೂರ್ವಾಶ್ರಮದ ಹೆಸರು:ಕು. ಅರವಿಂದ. ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಬಜಗೋಳಿಯಲ್ಲಿ, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪಿಯುಸಿಯನ್ನು, ಹಾಗೂ ಕಾರ್ಕಳದ ಶ್ರೀಮಠದಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆದು ಕೊಂಡರು. ಬಳಿಕ ಮಣಿಪಾಲದಲ್ಲಿ ಕಂಪ್ಯೂಟರ್ ತರಬೇತಿ ಹಾಗೂ ಸಿವಿಲ್ ಇಂಜಿನಿಯರ್ ಡಿಪ್ಲೋಮಾ ಪದವಿಯನ್ನು, ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು.
⭕ಜೈನ ಧಾರ್ಮಿಕ ವ್ರತ-ನಿಷ್ಠೆ ಸ್ವಾಧ್ಯಾಯದಲ್ಲಿ ಆಸಕ್ತಿ ಇರುವುದನ್ನು ಕಂಡ ಶ್ರವಣಬೆಳಗೊಳದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1998ರಲ್ಲಿ ಸಪ್ತಮ ಪ್ರತಿಮಾಧಾರಿಯಾಗಿ ವ್ರತೋಪದೇಶ ನೀಡಿ ಬ್ರಹ್ಮಚಾರಿಗಳನ್ನಾಗಿಸಿದರು.
⭕ಧಾರ್ಮಿಕ ಅಧ್ಯಯನದಲ್ಲಿ ನಿರತರಾದ ಅವರು ವಿಚಾರ ಪಟ್ಟದ ಕ್ಷುಲ್ಲಕ ದೀಕ್ಷೆಯನ್ನು ಪಡೆದರು. ಬಿಜಾಪುರದ ಮಹೇಂದ್ರಗಿರಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ಹೇಮಕೀರ್ತಿ ಸ್ವಾಮಿಗಳಾಗಿ ವಿರಾಜಮಾನರಾದರು. ಬಳಿಕ ಶ್ರೀ 1008 ಸಹಸ್ರಫಣಿ ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಸಮಿತಿಯ ಅಧ್ಯಕ್ಷರಾಗಿ ಆ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಕಾರಣರಾದರು.
⭕ದಿನಾಂಕ 29-08-1999ರಲ್ಲಿ ಸ್ವಾಧ್ಯಾಯಪ್ರಿಯ, ಮೇಧಾವಿ ಮತ್ತು ಸಮರ್ಥ ಗುರು ಶ್ರವಣಬೆಳಗೊಳ ಭಟ್ಟಾರಕರಿಂದ ದೀಕ್ಷಾ ಬದ್ಧರಾದ ಶ್ರೀಗಳು ಜೈನ ಆಗಮಗಳ ತೌರೂರಾದ ಮೂಡಬಿದ್ರೆಯ ಶ್ರೀಮಠದ ಪೀಠಾಧಿಪತಿಗಳಾದರು.ಈ ಮಠವು ನಲ್ಲೂರು, ಹಾಡುವಳ್ಳಿ (ಸಂಗೀತಪುರ) ಹಾಗೂ ಬಿಳಗಿಯಲ್ಲಿ ತನ್ನ ಉಪ ಶಾಖೆಗಳನ್ನು ಹೊಂದಿದೆ.
⭕ಮೂಡಬಿದ್ರೆಯ ಹಿನ್ನಲೆ: ಜೈನ ಧರ್ಮದ ಪವಿತ್ರ 63 ವಿಗ್ರಹಗಳನ್ನು, 4500 ಪದ್ಮ ಪತ್ರಗಳ ಮೇಲೆ ಬರೆದ ಧವಲತ್ರಯಗಳ ಸಾವಿರ ಕಂಬದ ಬಸದಿ ಹೊಂದಿದ ಮೂಡಬಿದರೆ ಶ್ರೀಮಠದ ಭಟ್ಟಾರಕರು ಹೊಯ್ಸಳ, ವಿಜಯನಗರ, ಭೈರವ, ಚೌಟರು, ಬಂಗರು, ಆಗಿಲರು, ಸೀಮಿತರು,ಬಲ್ಲಾಳರು, ಹೆಗ್ಗಡೆ ಮುಂತಾದ ಹಲವಾರು ರಾಜ್ಯ ಮನೆತನದ ರಾಜಗುರುಗಳಾಗಿದ್ದರು.
⭕ಈ ಮಠದ ಗುರುಪೀಠವು 6ನೇ ಶತಮಾನದಿಂದ ಇತ್ತೆಂದು ಅದನ್ನು ಕ್ರಿ. ಶ.1220ರಲ್ಲಿ ಶ್ರವಣಬೆಳಗೊಳದ ಅಂದಿನ ಭಟ್ಟಾರಕರು ಪ್ರಾರಂಭಿಸಿದರೆಂದು ತಿಳಿದು ಬರುತ್ತದೆ.
⭕ ಶ್ರೀಗಳು ಯೋಗ ಪರಿಣತರಾಗಿ, ಸಮಾಲೋಚಕರಾಗಿ, ಶಾಂತಿ ಪಾಲಕರಾಗಿ, ವಿಶ್ವ ಜಾಗತಿಕ ಧರ್ಮಗಳ ಅಧಿವೇಶನ ( ಸ್ವಾಮಿವಿವೇಕಾನಂದ ಭಾಗಿಯಾದ ಸಂಸ್ಥೆ 1885) ಚಿಕಾಗೋ ಇದರ ಜೈನ ಪ್ರತಿನಿಧಿಯಾಗಿ ಸತತ ಆರು ವರ್ಷಗಳಿಂದ(2014) ಪಾಲ್ಗೊಂಡ ಕೀರ್ತಿ ಶ್ರೀಗಳಿಗೆ ಇದೆ.
⭕2005ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯವು ಶ್ರೀಗಳ ಹಸ್ತಪ್ರತಿ ಪಾಲನೆ- ಪೋಷಣೆಗಾಗಿ ಹಾಗೂ ವಾಸ್ತು ಶಾಸ್ತ್ರದ ಅನುಪಮ ಪಾಂಡಿತ್ಯವನ್ನು ಕಂಡು " ಗೌರವ ಡಾಕ್ಟರೇಟ್" ನೀಡಿ ಗೌರವಿಸಿದೆ. ಇದು ಭಟ್ಟಾರಕ ಶ್ರೀಗಳ ಪೈಕಿ ಗೌರವ ಡಾಕ್ಟರೇಟ್ ಪದವಿ ದೊರೆತ ಮೊದಲಿಗರಾಗಿದ್ದಾರೆ.
✈ವಿದೇಶ ಪ್ರವಾಸ:
ಜೈನ ಧರ್ಮದ ಪ್ರಚಾರ ಮತ್ತು ಉಪನ್ಯಾಸ, ಸರ್ವಧರ್ಮ ಸಮ್ಮೇಳನ, ವಿಚಾರ ಸಂಕಿರಣ ಇತ್ಯಾದಿಗಳಲ್ಲಿ ಪಾಲ್ಗೊಳ್ಳಲು,ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯು. ಕೆ, ಯುಎಸ್ಎ,ಕೆನಡಾ, ಸ್ಪೇನ್, ನ್ಯೂಜಿಲ್ಯಾಂಡ್, ಯುಎಇ, ಜಪಾನ, ಹಾಕಾಂಗ್, ಸಿಂಗಪುರ, ಮಲೇಷಿಯಾ, ನೇಪಾಳ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಉಪನ್ಯಾಸಗಳಿಂದ ಜೈನ ಧರ್ಮದ ಪ್ರಚಾರ -ಪ್ರಸಾರ ಮಾಡಿದ್ದಾರೆ.
⭕ಶ್ರೀಗಳಿಗೆ ಕರ್ನಾಟಕ ಜೈನ ನೌಕರರ ಒಕ್ಕೂಟ ಹಾಗೂ ಕನಾ೯ಟಕ ಜೈನ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ಪರವಾಗಿ ಅನಂತಾನಂತ ಶಿರ ಸಾಷ್ಟಾಂಗ ನಮನಗಳು🙏🙏🙏
(ಡಾ. ಅಜಿತ ಮುರುಗುಂಡೆ. ಬೆಂಗಳೂರು.9448936461)



No comments:

Post a Comment