
ಜೈನ ದರ್ಶನದ ಪ್ರಖಾಂಡ ಪಂಡಿತರು, ರತ್ನಕರಂಡಕ ವಿಶಾರದರು,ಜೈನ ಧರ್ಮದ ಪ್ರಚಾರದಲ್ಲಿ ಶ್ರದ್ಧೆವುಳ್ಳವರು, ಲೇಖಕರು, ಪ್ರಖಾಂಡ ವಾಗ್ಮಿಗಳು, ಅಸಾಧಾರಣ ಪ್ರತಿಭಾಶಾಲಿಗಳು, ವಾಸ್ತು ಶಾಸ್ತ್ರಜ್ಞರು, ಕಲೆಯ ಪ್ರವರ್ತಕರು, ಆಶ್ರಯದಾತರು, ದಕ್ಷಿಣ ಕಾಶಿಯ 18 ಬಸದಿಗಳ ಶ್ರೇಯೋಭಿವೃದ್ಧಿಗಾಗಿನ ಪ್ರೆರಕರೂ ಆದ ಶ್ರೀಗಳ ಜನ್ಮದಿನ ಇಂದು. ಆ ಹಿನ್ನೆಲೆಯಲ್ಲಿ ಶ್ರೀಗಳ ಸಂಕ್ಷಿಪ್ತ ಪರಿಚಯ:

ಮೂಡಬಿದ್ರೆಯ ಹಿನ್ನಲೆ: ಜೈನ ಧರ್ಮದ ಪವಿತ್ರ 63 ವಿಗ್ರಹಗಳನ್ನು, 4500 ಪದ್ಮ ಪತ್ರಗಳ ಮೇಲೆ ಬರೆದ ಧವಲತ್ರಯಗಳ ಸಾವಿರ ಕಂಬದ ಬಸದಿ ಹೊಂದಿದ ಮೂಡಬಿದರೆ ಶ್ರೀಮಠದ ಭಟ್ಟಾರಕರು ಹೊಯ್ಸಳ, ವಿಜಯನಗರ, ಭೈರವ, ಚೌಟರು, ಬಂಗರು, ಆಗಿಲರು, ಸೀಮಿತರು,ಬಲ್ಲಾಳರು, ಹೆಗ್ಗಡೆ ಮುಂತಾದ ಹಲವಾರು ರಾಜ್ಯ ಮನೆತನದ ರಾಜಗುರುಗಳಾಗಿದ್ದರು.

ವಿದೇಶ ಪ್ರವಾಸ:
ಜೈನ ಧರ್ಮದ ಪ್ರಚಾರ ಮತ್ತು ಉಪನ್ಯಾಸ, ಸರ್ವಧರ್ಮ ಸಮ್ಮೇಳನ, ವಿಚಾರ ಸಂಕಿರಣ ಇತ್ಯಾದಿಗಳಲ್ಲಿ ಪಾಲ್ಗೊಳ್ಳಲು,ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯು. ಕೆ, ಯುಎಸ್ಎ,ಕೆನಡಾ, ಸ್ಪೇನ್, ನ್ಯೂಜಿಲ್ಯಾಂಡ್, ಯುಎಇ, ಜಪಾನ, ಹಾಕಾಂಗ್, ಸಿಂಗಪುರ, ಮಲೇಷಿಯಾ, ನೇಪಾಳ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಉಪನ್ಯಾಸಗಳಿಂದ ಜೈನ ಧರ್ಮದ ಪ್ರಚಾರ -ಪ್ರಸಾರ ಮಾಡಿದ್ದಾರೆ.
No comments:
Post a Comment