Monday, December 10, 2018

ಜೈನ್ ಕಾಶಿ ಯಲ್ಲಿ ಕದಿರು ಹಬ್ಬ 2018

ಜೈನ್ ಕಾಶಿ ಯಲ್ಲಿ ಕದಿರು ಹಬ್ಬ
ಪ್ರಾಯಶಃ ಇದು ಕರ್ನಾಟಕದ ಕರಾವಳಿಯಲ್ಲಿ ಮಾತ್ರ ಪ್ರಚಲಿತವಿರುವ ಒಂದು ಹಬ್ಬ. ಇದನ್ನು ಹಬ್ಬ ಅನ್ನೊ ಬದಲು ಒಂದು ಆಚರಣೆ ಅನ್ನಬಹುದು. ಜೂನ್ ನಲ್ಲಿ ಭತ್ತದ ನಾಟಿ ಮಾಡಿದ್ದರೆ, ಸುಮಾರಾಗಿ ನವರಾತ್ರಿ ಸಮಯದಲ್ಲಿ ತೆನೆ ಕೂತಿರುತ್ತದೆ. ಕುಯಿಲು ಶುರು ಮಾಡುವ ಮೊದಲು, ನವರಾತ್ರಿಯಲ್ಲಿ ದಶಮಿ ಯ ದಿನ ಮೂಡುಬಿದಿರೆ ಜೈನ್ ಕಾಶಿ ಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಆಚರಣೆಯನ್ನು ಕುರಲ್ ಪರ್ಬ ,ಪೊಸ ಅರಿ ಉಣಸ್,ಪುದ್ದರ್ ಹೊಸ ಅಕ್ಕಿ ಊಟ,ಮೊದಲಾದ ಹೆಸರಿನಿ೦ದಲೂ ಕರೆಯುತ್ತಾರೆ " ಭರತ ಚಕ್ರವತಿ೯  ವಿಜಯ ದಶಮಿ ಯ೦ದು ಚತುನಿ೯ಕಾಯ ದೇವತೆ ಗಳನ್ನುಶೋಡಷೋಪಚಾರ ಪೋಜೆ ಸಲ್ಲಿಸಿ ಆಯುದಗಾರ ದ ಆಯುದ ಗಳನ್ನು ಚಕ್ರರತ್ನ ವನ್ನುದಾನ್ಯ ರಾಶಿ ಯನ್ನು ಪೂಜಿಸಿ ಭೂಮಿ ದೇವಿ ಯನ್ನು ಕ್ರತಜ್ಞತೆಯಿ೦ದ ಪೂಜಿಸಿ ದ ದಿನ
 ಈ ಹಬ್ಬದ ದಿನ, ಬೆಳಿಗ್ಗೆ ಬೇಗ ಗದ್ದೆಗೆ ಹೋಗಿ, ತೆನೆಗೆ/ಕದಿರಿಗೆ ಪೂಜೆ ಮಾಡುತ್ತಾರೆ. ತೆನೆಯಲ್ಲಿ ತೆನೆಗಳನ್ನು ಕತ್ತರಿಸಿ, ಹರಿವಾಣದಲ್ಲಿ ಇಟ್ಟು, ಜಾಘಂಟೆ ಹಾಗು ಶಂಖದ ನಾದದೊಂದಿಗೆ, ವಾದ್ಯಘೋಷ ಗಳೊ೦ದಿಗೆ ಸಮಸ್ತ ಜೈನ ಕಾಶಿ ಯ ಪೇಟೆಯ ಶ್ರಾವಕರು ತಲೆಯ ಮೇಲೆ ತೆನೆ  ಹೊತ್ತು, ಅವರವರ ಮನೆಗೆ  ತೆನೆ ತರುತ್ತಾರೆ  ಗುರು ಬಸದಿ ಪುರೋಹಿತರು ಶ್ರಾವಕರೊ೦ದಿಗೆ ಕದಿರೆ ಕಟ್ಟೆಯಿ೦ದ ನೇರವಾಗಿ ಶ್ರೀ ಮಠ ಕ್ಕೆ, ಕದಿರೆ ತರುತ್ತಾರೆ.  ಶ್ರೀ ಜೈನ ಮ ಕ್ಕೆ ಬ೦ದು ಪರಮಪೊಜ್ಯ ಸ್ವಸ್ಥಿ ಶ್ರೀ ಭಟ್ಟಾರಕ ಚಾರುಕೀತಿ೯ಪ೦ಡಿತಾಚಯ೯ವಯ೯ಮಹಾಸ್ವಾಮೀಜಿಗಳವರ ದಿವ್ಯ ಉಪಸ್ತಿತಿ ಯಲ್ಲಿ ಭಗವಾನ್ ೧೦೦೮ ಪಾಶ್ವ೯ನಾಥ ಸ್ವಾಮಿ ಅಷ್ಟವಿದಾಚ೯ನೆ , ಶ್ರಿ ಮ ದ  ಪಟ್ಟದ  ಮಹಾಮಾತೆ ಕೂಶ್ಮಾ೦ಡಿನಿ ದೇವಿ,ಮಾತೆ ಪದ್ಮಾವತಿ ಯಕ್ಷಿ,ಬ್ರಹ್ಮ ದೇವರ , ಭೂಮಿ ದೇವಿ ,ದಾನ್ಯ ಲಕ್ಷ್ಮಿಯ ಆಹ್ವಾನ ಸ್ಥಾಪನ ಸನ್ನೀದಿಕರಣ ಮಾಡಿ ಧಾನ್ಯಲಕ್ಷ್ಮಿಯನ್ನು ಆವಾಹನೆ ಮಾಡಿ, ಶೋಡಷೋಪಚಾರ ಪೋಜೆ ನವಗ್ರ ಹ ವಾಸ್ತು,ದಿಕ್ಪಾಲ,ಕ್ಷೆತ್ರಪಾಲ ,ತಿಥಿ ದೇವ ರಿಗೆಪೋಜೆ ಸಲ್ಲಿಸಿ  ಭಗವಾನ್  ಪಾಶ್ವ೯ನಾಥ ಸ್ವಾಮಿ ಯಕ್ಷಿ ಕೊಶ್ಮಾ೦ಡಿನೀ ಪದ್ಮಾವತಿ ಅಮ್ಮನವರಿಗೆ ಮಹಾಮ೦ಗಳಾರತಿ  ಮಾಡುತ್ತಾರೆ. ಶ್ರಿ ಗಳವರಿಗೆ ಆರತಿ ಕೊಟ್ಟು ಭಗವ೦ತನ ಅಬಿಷೇಕದ ಗ೦ದೋದಕ ನೀಡುತ್ತಾರೆ ಶ್ರಿ ಶ್ರಿ ಗಳವರು ಸದ್ದಮ೯ ದಮ೯ಸಿ೦ಹಾಸನದಲ್ಲಿ ವಿರಾಜಮಾನರಾಗಿ ಬ೦ದಿರುವ ಸಮಸ್ತ ರಿಗೊ ಹರಸಿ ಆಶೀವ೯ದಿಸುತ್ತಾರೆ ಆಮೇಲೆ, ಪೂಜೆ ಮಾಡಿದ ದಾನ್ಯ ಉಳ್ಳ ತೆನೆ ಗಳ ಗೊ೦ಚಲುಗಳನ್ನು ಮಾವಿನಏಲೆ ಹಾಗೊ ದಭೆ೯ ಹುಲ್ಲಿನಿ೦ದ ಕಟ್ಟೀ ಅವರವರ ಮನೆಗೆ ತಂದ ಕದಿರನ್ನು ಮಾವಿನ ಎಲೆ ಸಮೇತ ಕಟ್ಟಿ, ದೇವರ ಮನೆಗೆ, ಕಂಬಕ್ಕೆ, ದನದ ಕೊಟ್ಟಿಗೆಗೆ, ಬಾವಿಗೆ, ಕೃಷಿ ಉಪಕರಣಗಳಿಗೆ, ವಾಹನಕ್ಕೆ ಮನೆ ,ಗುತ್ತು,ಬೀಡು,ಅರಮನೆ,ಗುರುಮನೆ,ಶ್ರಿ ಮ ಗಳ ಮು೦ಬಾಗದ ಛಾವಡಿಯಲ್ಲಿ ಕಟ್ಟುತ್ತಾರೆ. ಇದರಿಂದಾಗಿ ಈ ಹಬ್ಬಕ್ಕೆ "ಕದಿರು ಕಟ್ಟುವುದು" ತೆನೆ ಹಬ್ಬ ಹೊಸ ಅಕ್ಕಿ ಊಟ  ಅನ್ನುವ ಹೆಸರೂ ಇದೆ  ಇದು ಜೈನರ ಕ್ರ್ ಷಿಗೆ ಸ೦ಬ೦ದ ಪಟ್ಟ   ಪ್ರಸಿದ್ದ ವಾದ ಸ೦ಪ್ರದಾಯಿಕ ಹಬ್ಬ

ತೆನೆಯ ಸ್ವಲ್ಪ ಅಕ್ಕಿಕಾಳು ಗಳನ್ನು ಸೇರಿಸಿ  ಎಲ್ಲರೊ ಸೇರಿ ಸ೦ತೋಷದಿ೦ದ  ಹೊಸ ಅಕ್ಕಿ ಊಟ ಮಾಡುತ್ತಾರೆ.

ಪೂಜೆ ಮಾಡಿದ ಕದಿರಿನಿಂದ  ಬತ್ತದ ಕಾಳು ತೆಗೆದು, ಅಕ್ಕಿ ಬಿಡಿಸಿ, ಹಳೆ ಅಕ್ಕಿ ಜೊತೆ ಸೇರಿಸಿ ಗಂಜಿ ಮಾಡುತ್ತಾರೆ. ಇದಕ್ಕೆ "ಹೊಸತು"  ಅಂತ ಹೆಸರು. ನಂತರ, ಮನೆಮಂದಿಯೆಲ್ಲ ಸೇರಿ ಹೊಸ ಅಕ್ಕಿ ಊಟ ಮಾಡುತ್ತಾರೆ.

No comments:

Post a Comment