Friday, October 30, 2015

ರಾಜ ಗುರು ಚಾರುಕೀರ್ತಿ ಸ್ವಾಮೀಜಿ ಮಠವು ಐತಿಹಾಸಿಕ ಪ್ರಸಿದ್ಧ ಮಠ .

ಜೈನ ದೇವಾಲಯಗಳಿಗೆಂದೇ ಪ್ರಸಿದ್ಧಿ ಹೊಂದಿರುವ ಮೂಡಬಿದಿರೆ ಜೈನ ಕಾಶಿ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿರುವ ಹೊಳಪುಳ್ಳ ಗ್ರಾನೈಟ್ ಬಳಸಿ ನಿರ್ಮಿಸಿರುವ ಚಂದ್ರನಾಥ ದೇವಾಲಯವು ಅತ್ಯಾಕರ್ಷಕವಾಗಿದೆ. ವಿಶಿಷ್ಟ ಕೆತ್ತನೆಗಳಿಂದ ಕಂಗೊಳಿಸುರವ 1000 ಕಂಬಗಳು ,ಈ ದೇವಾಲಯದಲ್ಲಿರುವುದು ವಿಶೇಷ ಹೊಯ್ಸಳ ಅರಸರು ದ್ವಾರಸಮುದ್ರ (ಇಂದಿನ ಹಳೆಬೀಡು)ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು.ಹೊಯ್ಸಳ ಅರಸರು ಜೈನ ಧರ್ಮವನ್ನು ಪಾಲಿಸಿದರಾದರೂ, ಅವರು ಎಲ್ಲ ಧರ್ಮಾವಲಂಬಿಗಳಿಗೂ ಒಂದೇ ದೃಷ್ಟಿಯಿಂದ ... ಹೊಯ್ಸಳ ಅರಸರು ಶಿವನಿಗೆ, ವಿಷ್ಣುವಿಗೆ ಈ ಜಿಲ್ಲೆಯಲ್ಲಿ ಕಟ್ಟಿಸಿರುವ ಹಲವಾರು ದೇವಾಲಯಗಳು ಇದಕ್ಕೆ ಸಾಕ್ಷಿಯಾಗಿವೆ ದೊರೆ ಎರಡನೆಯ ವೀರಬಲ್ಲಾಳನ ರಾಜ ಗುರು ಚಾರುಕೀರ್ತಿ ಸ್ವಾಮೀಜಿ ಮಠವು ಐತಿಹಾಸಿಕ ಪ್ರಸಿದ್ಧ ಮಠ . ಶಕ 1220 ರಲ್ಲಿ ಶ್ರೀ ಮಠ ಎರಡನೆಯ ಹೊಯ್ಸಳ ವೀರಬಲ್ಲಾಳನ ಜೀವ ರಕ್ಷ ಪಾಲಕ ಆಧ್ಯಾಚಾರುಕೀರ್ತಿ ಸ್ವಾಮೀಜಿ ಸ್ಥಾಪಿಸಿದರು ,ಬನ್ನಿಕೆರೆ ಉತ್ತುಂಗ ಜಿನ ಚೈತ್ಯಾಲಯದಲ್ಲಿದ್ದ ಆಚಾರ್ಯ ಶುಭ ಚಂದ್ರ ರಲ್ಲಿದ್ದ ಧವಳ ಗ್ರಂಥ ಏಕೈಕಮೂಲ ಸಿದ್ದಾಂತ ಗ್ರಂಥ ಪ್ರತಿ ಲಿಪಿ ಮೂಡಬಿದಿರೆ ಜೈನ ಕಾಶಿ ಯಲ್ಲಿಸಂರಕ್ಷಣೆ ಮಾಡಿರುವುದರಿಂದ ಮೂಡಬಿದಿರೆ ಶ್ರೀ ಮಠಹಾಗೂ ಜೈನ ಕಾಶಿ 18, ಬಸದಿ, ದೇವಾಲಯ ಭಕ್ತ ರಿಗೆ ಪ್ರವಾಸಿಗರಿಗೆ ಪ್ರಖ್ಯಾತ ತೀರ್ಥಯಾತ್ರಾ ಸ್ಥಳವನ್ನಾಗಿಸಿವೆ

No comments:

Post a Comment